ಮೋಡಿ ಮಾಡಿದ ಕಲ್ಲು

Jan 29, 2026 - 09:44
 0  27
ಮೋಡಿ ಮಾಡಿದ ಕಲ್ಲು

ಎಲ್ಲಿಂದಲೋ 

ತೂರಿ ಬಂದ ಕಲ್ಲೊಂದು 

ನಮ್ಮೂರ ನಟ್ಟ ನಡುವೆ ಬೀಳಬೇಕೆ?

 ಅದಕ್ಕೆ ಕಣ್ಣಿಲ್ಲ ಮೂಗಿಲ್ಲ 

ಕಿವಿಯಂತೂ ಇಲ್ಲವೇ ಇಲ್ಲ!

ಆದರೂ ಈ ಜನರು ಅರಿಶಿನ-ಕುಂಕುಮ 

ಹಚ್ಚಿದರು, ಹೂ ಮುಡಿಸಿದರು! 

ಅದಕ್ಕೆ ಚರ್ಮವಿಲ್ಲ ದೇಹವಿಲ್ಲ 

ಬಾಯಿಯಂತೂ ಇಲ್ಲವೇ ಇಲ್ಲ 

ಆದರೂ ಧೂಪ ತೀರ್ಥ ಪ್ರಸಾದ 

ಪಂಚ ಪಕ್ವಾನದ ನೈವೇದ್ಯದೂಟ 

ಅದಕ್ಕೆ ತಲೆಯಿಲ್ಲ ಬುಡವಿಲ್ಲ 

ಕೈಕಾಲುಗಳಂತೂ ಇಲ್ಲವೇ ಇಲ್ಲ 

ಆದರೂ ಮುತ್ತು ರತ್ನ ರೇಶಿಮೆ ಹೊದಿಕೆ 

ಬೆಳ್ಳಿ ಬಂಗಾರದ ಕಿರೀಟ 

ನಮ್ಮೂರಿನ ಜನರು ಈಗ ಅದು 

ಹೆಣ್ಣೊ ಗಂಡೊ ನಿರ್ಧರಿಸಲಾಗದೆ 

ಅವರಿಷ್ಟದಂತೆ ವರ ಬೇಡುತ್ತಿದ್ದಾರೆ 

ಕೋಟಿ ಜಪ ಮಾಡುತ್ತಿದ್ದಾರೆ 

ಹರಕೆ ವ್ರತಗಳನ್ನು ನಡೆಸುತ್ತಿದ್ದಾರೆ 

ಆದರೂ ನೋವು ನಷ್ಟಗಳು ನಿಲ್ಲುತ್ತಿಲ್ಲ 

ಕಣ್ಣೀರು ಹರಿಯುವುದು ತಪ್ಪಲಿಲ್ಲ 

ನಮ್ಮುದ್ಧಾರಕ್ಕೆ ನಮ್ಮದೇ ಶಕ್ತಿ 

ಎಂಬುದನ್ನು ಇವರು ತಿಳಿಯುತ್ತಿಲ್ಲ

ಉದಂತ ಶಿವಕುಮಾರ 

ಕವಿ, ಬೆಂಗಳೂರು-56

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456