ಮೌನದ ಭಾಷೆಯಿಂದಲೇ ಪ್ರೇಕ್ಷಕರ ಕಣ್ಣನ್ನು ತೇವವಾಗಿಸಿದ ಭಾವನಾತ್ಮಕ ನೃತ್ಯ ನಾಟಕ " ರುದ್ರ ಗಣಿಕ"

Feb 5, 2026 - 13:34
 0  2
ಮೌನದ ಭಾಷೆಯಿಂದಲೇ ಪ್ರೇಕ್ಷಕರ ಕಣ್ಣನ್ನು ತೇವವಾಗಿಸಿದ ಭಾವನಾತ್ಮಕ ನೃತ್ಯ ನಾಟಕ " ರುದ್ರ ಗಣಿಕ"

 ಚಪ್ಪಾಳೆ...... ಚಪ್ಪಾಳೆ. ಚಪ್ಪಾಳೆ...
 ಸಂಭ್ರಮದ ಕೂಗಾಟ, ಸಂತಸದ ಚೀರಾಟ... ನಿರಂತರ ಚಪ್ಪಾಳೆ ಈ ಘಟನೆ ನಡೆದದ್ದು ಕಲಾಗ್ರಾಮದ ರಂಗ ಮಂದಿರದಲ್ಲಿ.
 ಈ ಘಟನೆ ನಡೆದದ್ದು ಫೆಬ್ರವರಿ 4. ರಾತ್ರಿ ಸುಮಾರು 8:45.

 ಮಲ್ಲತ ಹಳ್ಳಿಯ ಕಲಾಗ್ರಾಮದ ರಂಗಮಂದಿರದಲ್ಲಿ ಜರುಗಿದ ಮೂಕ ನಾಟಕವನ್ನು ವೀಕ್ಷಿಸಿ ಪ್ರೇಕ್ಷಕರು ತನ್ನ ಕಣ್ಣುಗಳನ್ನು ತೇವವಾಗಿಸಿಕೊಂಡರು. " ರುದ್ರ ಗಣಿಕ" ನಾಟಕದಲ್ಲಿ ಅಭಿನಯಿಸಿದ ಕೊಲ್ಕತ್ತಾದ ಕಲಾವಿದರಿಗೆ ಹುರಿದುಂಬಿಸಲು, ಪ್ರೋತ್ಸಾಹಿಸಲು, ಚಪ್ಪಾಳೆಯ ಪ್ರಕ್ರಿಯೆಯನ್ನು ಮುಂದುವರಿಸುತ್ತಲೇ ಇದ್ದರು.

 ಈ ಬೆಂಬಲ, ಪ್ರೋತ್ಸಾಹ, ಸಂತೋಷದ ಕೊಗಾಟ, ಸಂಭ್ರಮದ ಚೀರಾಟದಿಂದ ಕಲಾ ವಿದರೂ ಹಾಗೂ ನಾಟಕದ ತಂತ್ರಜ್ಞರು ಆನಂದಬಾಷ್ವವನ್ನು ತಮ್ಮ ತಮ್ಮ ಕಣ್ಣುಗಳಲ್ಲಿ ತೋರ್ಪಡಿಸಿದರು.

  ಈ ಒಂದು ಭಾವನಾತ್ಮಕ ಹೃದಯ ಸ್ಪರ್ಶಿ ಮೌನದ ಭಾಷೆಯಲ್ಲಿ " ದೇವದಾಸಿ " ಪದ್ಧತಿ ಸುತ್ತಮುತ್ತಲಿನ ಪರಿಕಲ್ಪನೆ ಹೊಂದಿತ್ತು. ದೇವದಾಸಿ ಪದ್ಧತಿಯನ್ನು ಮಹಿಳೆ ಯಾವ ರೀತಿ ಅನುಭವಿಸುತ್ತಾಳೆ, ಎದುರಿಸುತ್ತಾಳೆ, ಪುರುಷರ ದೌರ್ಜನ್ಯಕ್ಕೆ ಉತ್ತರಗಳನ್ನು  ನೀಡುವ ಅಂಶಗಳನ್ನು ಈ ನೃತ್ಯ ನಾಟಕ ಹೊಂದಿತ್ತು.
 ಕೊಲ್ಕತ್ತಾದ " ಭಗವತಿ ನೃತ್ಯ ಮಂದಿರ " ತಂಡ ಈ ಪ್ರದರ್ಶನವನ್ನು ನಿರ್ವಹಿಸಿತು.
 ಇದರರಂಗಪಟ್ಟಿ ಹಾಗೂ ನಿರ್ದೇಶನವನ್ನು " ಸೋಮಗಿರಿ " ಅದ್ಭುತವಾಗಿ ವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456