ಕರ್ನಾಟಕ ರಾಜ್ಯ ಶ್ರೀ ಶಿವಶರಣ ಸಮಗಾರ (ಚಮ್ಮಾರ) ಹರಳಯ್ಯ ಸಂಘ (ರಿ) ನಾಗರಭಾವಿ, ಬೆಂಗಳೂರು.
ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಸಿಂಧನೂರು ನಗರದ ಟೌನ್ ಹಾಲ್ನಲ್ಲಿ ನಡೆದ ರಾಯಚೂರು ಮತ್ತು ಕೊಪ್ಪಳ ಜಿಲ್ಲಾಧ್ಯಕ್ಷರ ಆಯ್ಕೆ ಯಲ್ಲಿ ಎರಡು ಜಿಲ್ಲೆಗಳಿಂದ ಆವಿರೋಧವಾಗಿ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು ರಾಯಚೂರು ಜಿಲ್ಲಾಧ್ಯಕ್ಷರಾಗಿ ಲಾಲಪ್ಪ. S. ಬಾಲಗವಿ..
ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ರವಿ ಸಾಣಕೆನವರ್ ಇವರಗಳು ಆವಿರೋಧವಾಗಿ ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಜಗದೀಶ್ ಬೆಟಗೇರಿ ರಾಜ್ಯ ಘಟಕದ ಗೌರವಾಧ್ಯಕ್ಷರಾದ ಎಲ್ಲಪ್ಪ ಬೆಂಡಿಗೇರಿ, ರಾಜ್ಯ ಉಪಾಧ್ಯಕ್ಷರಾದ ಪರಶುರಾಮ್ ಅರಕೇರಿ, ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಸುನಿಲ್ ಮಾರನಬಾವಿ. ಹಾಗೂ ಈ ಸಿ ಮೆಂಬರ್ ಗಳಾದ ಸಂಗಮೇಶ್ ಬಾಲಗವಿ, ದಶರಥ ಅರಕೇರಿ, ಪರಶುರಾಮ್ ವಿ ಹೊನಕೇರಿ, ವೆಂಕಟೇಶ್ ಮುಂಡೇವಾಡಿ. ಇವರುಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಜಿಲ್ಲಾಧ್ಯಕ್ಷರಾಗಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಹಾಗೂ ಯುವಕರು ಮತ್ತು ಮಹಿಳೆಯರು ಎಲ್ಲರೂ ಪಾಲ್ಗೊಂಡಿದ್ದರು