ರಾಯರ ರಂಗ ಮಂದಿರದಲ್ಲಿ ದಾಸವಾಣಿ  ಕಾರ್ಯಕ್ರಮ

May 30, 2025 - 17:20
 0  3
ರಾಯರ ರಂಗ ಮಂದಿರದಲ್ಲಿ ದಾಸವಾಣಿ  ಕಾರ್ಯಕ್ರಮ

ಚನ್ನರಾಯಪಟ್ಟಣ: ಮಂತ್ರಾಲಯ ಪೀಠಾಧಿಪತಿಗಳ  ಆಶೀರ್ವಾದದಿಂದ ಚನ್ನರಾಯಪಟ್ಟಣದ ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ಮೇ 29ರಂದು ಗುರುವಾರ ಬೆಳಿಗ್ಗೆ ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ವಿಶೇಷ ಅಲಂಕಾರ ಅಭಿಷೇಕ ಪ್ರಸಾದ  ಸೇವೆ ನೆಡೆಯಿತು. ಸಂಜೆ ಅಖಿಲ ಭಾರತೀಯ ಸಂಗೀತ  ನೃತ್ಯ ಕಲಾವಿದರ ಒಕ್ಕೂಟದ ಆಶ್ರಯದಲ್ಲಿ    ಬೆಂಗಳೂರಿನ ಹಿರಿಯ ಕಲಾವಿದರಾದ  ಡಾ. ವಿಟ್ಟಲ್ ಹಾಗೂ ಶ್ರೀ ಪ್ರಶಾಂತ್ ರವರ ತಂಡದೊಂದಿಗೆ  ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಸಂಬಂಧಿಸಿದ  ಕೃತಿಗಳಿಗೆ ಸಂಗೀತ ದಾಸವಾಣಿ ಕಾರ್ಯಕ್ರಮವನ್ನು   ಸಮರ್ಪಣೆ ಮಾಡಿದ ಕಾರ್ಯಕ್ರಮವನ್ನು ನೂರಾರು ಜನ ಭಕ್ತಾದಿಗಳು ಕಣ್ಣು ತುಂಬಿಕೊಂಡರು ಇದೆ ಸಂದರ್ಭದಲ್ಲಿ ಕಲಾವಿದರಿಗೆ ಮಂತ್ರಾಲಯದ ಪರಿಮಳ ಪ್ರಸಾದ ನೀಡುವ ಮೂಲಕ   ಸನ್ಮಾನಿಸಿ ಗೌರವಿಸಲಾಯಿತು ನಂತರ ಮಹಾಮಂಗಳಾರತಿ ಪ್ರಸಾದನ ವಿನಿಯೋಗ ಮಾಡಲಾಯಿತು  ರಾತ್ರಿ ಸೇವೆಯಲ್ಲಿ ಎ. ಸಿ. ನಾಗಪ್ಪ ದಂಪತಿಗಳು, ಶ್ರೀ ಮಂಜುನಾಥ ಕುಟುಂಬ, ಬರೋಡ ಬ್ಯಾಂಕ್ ವ್ಯವಸ್ಥಾಪಕರಾದ ಎಸ್. ಮಂಜುನಾಥ್ ಮತ್ತು ಕುಟುಂಬ, ಕಾಳೇನಹಳ್ಳಿ ಆನಂದ್, ರಂಗಮಂದಿರದ ಮುಖ್ಯಸ್ಥರಾದ ಶ್ರೀಮತಿ ಕೆ ಆರ್ ಅನಿತಾ, ಎಂ ಕೆ ಪ್ರಕಾಶ್  ಹಾಗೂ ಅಖಿಲ ಭಾರತೀಯ ಸಂಗೀತ  ನೃತ್ಯ ಕಲಾವಿದರ ಒಕ್ಕೂಟದ ಸಂಚಾಲಕರಾದ ವಿದೂಷಿ.  ಶ್ರೀಮತಿ ಡಾ.ಸ್ವಾತಿ ಪಿ ಭಾರದ್ವಾಜ್, ಯೋಗೇಶ್, ಅರುಣ್, ಮೋನಿಷ, ಹಿತನ್ಯ, ಸೇರಿದಂತೆ ಇತರರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456