ರಾಯರ ರಂಗಮಂದಿರದಲ್ಲಿ ಗೋ ಪೂಜೆ ನೈವೇದ್ಯದೊಂದಿಗೆ ದೀಪಾವಳಿ ಆಚರಣೆ
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ರಾಯರ ರಂಗಮಂದಿರದಲ್ಲಿರುವ ಮುಕ್ಕೋಟಿ ದೇವರ ಸ್ವರೂಪವಾದ ರಾಧೆಯ ಪೂಜೆಯೊಂದಿಗೆ ಪ್ರಾರಂಭಗೊಂಡ ಭಾರತೀಯ ಹಿಂದೂ ಧರ್ಮದ ಹಬ್ಬವಾದ ನರಕಾಸುರನನ್ನು ಶ್ರೀಕೃಷ್ಣ ಮತ್ತು ಸತ್ಯಭಾಮೆ ಸೋಲಿಸಿದ್ದನ್ನು ನರಕ ಚತುರ್ದಶಿ ನೆನಪಿಸುತ್ತ ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವಿನ ಸಂಕೇತ.
ಹಾಗು ಬಲಿಪಾಡ್ಯಮಿಯು, ಶ್ರೀಕೃಷ್ಣನು ವಾಮನ ಅವತಾರದಲ್ಲಿ ದಾನಶೂರ ಬಲಿ ಚಕ್ರವರ್ತಿಯನ್ನು ಪಾತಾಲಕ್ಕೆ ಅಟ್ಟಿದ್ದನ್ನು ಸ್ಮರಿಸುತ್ತ ಬಲಿರಾಜನನ್ನು ಗೌರವಿಸುವ ಮತ್ತು ಭೂಮಿಯಲ್ಲಿ ಅವನ ಆಳ್ವಿಕೆಯನ್ನು ನೆನಪಿಸಿಕೊಳ್ಳುವ ಹಬ್ಬವಾಗಿ ರಾಯರ ರಂಗಮಂದಿರದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಯಿತು
ನರಕಾಸುರನ ಸಂಹಾರದ ಕಥೆಯನ್ನು ಹೇಳುವ ಚಿತ್ರವನ್ನು ಗೋವಿನ ಸಗಣಿಯಿಂದ ಬಿಡಿಸಿ ವಾಮನನನ್ನು ಪೂಜಿಸುವ ಮೂಲಕ ಎಂಟು ಬಗೆಯ ನೈವೇದ್ಯವನ್ನಿಟ್ಟು ಮಹಾಮಂಗಳಾರತಿಯೊಂದಿಗೆ ಗೋಮಾತೆಯನ್ನು ಪೂಜಿಸಿ ನಂತರ ನೈವೇದ್ಯದ ಮೃಷ್ಟಾನ್ನ ಭೋಜನವನ್ನು ಗೋವಿಗೆ ಉಣಬಡಿಸುವ ಮೂಲಕ ಹಬ್ಬವನ್ನು ಆಚರಿಸಲಾಯಿತು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
