ವಿದ್ಯುತ್ ಖಾಸಗೀಕರಣ ವಿರೋಧಿಸಿ ಸಂತೆಮರಹಳ್ಳಿ ಕೆಇಬಿ ಕಛೇರಿ ಮುಂದೆ ಪ್ರತಿಭಟನೆ
ಸಂತೆಮರಹಳ್ಳಿ: ವಿದ್ಯುತ್ ಖಾಸಗೀಕಾರಣ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವತಿಯಿಂದ ಸಂತೆಮರಹಳ್ಳಿ ಕೆಇಬಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂತೆಮರಹಳ್ಳಿ ಕೆಇಬಿ ಕಛೇರಿ ಮುಂಭಾಗ ಜಮಾಯಿಸಿದ ಅಧಿಕಾರಿಗಳು ಹಾಗೂ ನೌಕರರು ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಬೇಡ, ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀ ಕಾರಣ ಬೇಡ ಕಾರ್ಮಿಕರ ಒಗ್ಗಟ್ಟುಚಿರಾಯುವಾಗಲಿ ಎಂದು ಘೋಷಣೆ ಕೂಗಿ ಪ್ರತಿಭಟನೆ ಮಾಡಲಾಯಿತು.
ನೌಕರ ಸಂಘದ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ ಖಾಸಗೀಕರಣ ಮಾಡಿರುವುದರ ವಿರುದ್ಧ ಆಲ್ ಇಂಜಿನಿಯರ್ ಒಕ್ಕೂಟ ಸಂಘ ಸಂಸ್ಥೆಗಳು ಒಂದು ದಿನ ಮಾಡಿರುವ ಮುಷ್ಕರವನ್ನು ಬೆಂಬಲಿಸಿ ನಾವು ಪ್ರತಿಭಟನೆ ಮಾಡಿದ್ದೇವೆ ಎಂದರು. ವಿದ್ಯುತ್ ಸುಧಾರಣೆ ಕಾಯ್ದೆ 2026 ಗ್ರಾಹಕರಿಗೆ ನೌಕರರ ವರ್ಗದವರಿಗೆ ಮಾರಕವಾಗಲಿದ್ದು ಇದು ಕಾರ್ಮಿಕ ವಿರೋಧ ನೀತಿಯಾಗಿದೆ ಎಂದರು. ಇದರಿಂದ ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಹೊರೆಯಾಗಲಿದೆ.
ಕೃಷಿ ಉದ್ದೇಶಕ್ಕೆ ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್ ಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ,ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಉಚಿತ ವಿದ್ಯುತ್ ಗೆ ಕಡಿವಾಣ ಬೀಳುವ ಸಾಧ್ಯತೆ ಇದೆ ಎಂದರು.ಈ ಕ್ಷೇತ್ರದಲ್ಲಿ 60 ಸಾವಿರಕ್ಕೂ ನೌಕರರು ಸಂಘ ಸಂಸ್ಥೆ ಕಟ್ಟಿ ಬೆಳಸಿದ ನೌಕರರಿಗೆ ತೊಂದರೆ ಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಎಂ ಪಿ ಪ್ರಶಾಂತ್, ಇಂಜಿನಿಯರ್ಗಳಾದ ಸತೀಶ್ ,ಮುದ್ದುರಾಜ್, ತಿಪ್ಪೇಸ್ವಾಮಿ, ಮಧು ಹಾಗೂ ಸಿಬ್ಬಂದಿಗಳಾದ ಮಲ್ಲೇಶ್, ಶಾಂತರಾಜು, ಸರ್ವೇಶ್, ಸುರೇಶ, ಪದ್ಮನಾಭ, ಪ್ರತೀಶ್ , ರವೀಶ್ ಹಾಗೂ ಮತ್ತಿತರರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
