ಶನೇಶ್ವರ ಜಯಂತೋತ್ಸವ ಅಂಗವಾಗಿ ಶನಿಮಹಾತ್ಮನಿಗೆ ಕಷ್ಟನಿವಾರಣೆ ಶಾಂತಿ ಪೂಜೆ
ಬಾಗೇಪಲ್ಲಿ: ಅಪರೂಪಕ್ಕೆ ಬರುವ ಶನಿ ಅಮಾವಾಸ್ಯೆಯಾದ ಮಂಗಳವಾರದಂದು ಬಾಗೇಪಲ್ಲಿ ಶನಿಮಹಾತ್ಮ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದು ಕಷ್ಟ ನಿವಾರಣೆಗೆ ಹಾಗೂ ಶಾಂತಿಗಾಗಿ ಶನಿಮಹಾತ್ಮನನ್ನು ಪ್ರಾರ್ಥಿಸಲಾಯಿತು.
ಪಟ್ಟಣನದ ಹೊರವಲಯದ ಶನಿಮಹಾತ್ಮ ದೇವಾಲಯದಲ್ಲಿ ಮಂಗಳವಾರ ಅಮಾವಾಸೆ ಅಂಗವಾಗಿ ಅದರಲ್ಲೂ ಅಪರೂಪಕ್ಕೆ ಬರುವ ಶನಿ ಅಮಾವಾಸ್ಯೆಯ ಜೊತೆಗೆ ಶನೇಶ್ವರ ಜಯಂತಿ. ಹಾಗಾಗಿ ಶನಿಮಹಾತ್ಮನನ್ನು ಪೂಜಿಸಲು ಇದೊಂದು ವಿಶೇಷ ದಿನದಂದು ವಿಶೇಷ ಪೂಜೆ ಪುನಸ್ಕಾರ ಹೋಮ ಶಾಂತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ನೂರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ದೇವಸ್ಥಾನಕ್ಕೆ ತೆರಳಿ ಭಕ್ತಿಯಿಂದ ಕೈ ಮುಗಿದು ಪೂಜಾ ಕಾರ್ಯಗಳಲ್ಲಿ ತಲ್ಲೀನರಾಗಿ ಎಲ್ಲ ಕಷ್ಟಗಳನ್ನು ಪರಿಹರಿಸಿ ಶಾಂತಿಯನ್ನು ಕರುಣಿಸೆಂದು ಆ ಭಗವಂತನಲ್ಲಿ ಪ್ರಾರ್ಥಿಸಿದರು.ವಿಶೇಷ ಪೂಜೆ ಪುನಸ್ಕಾರ ಶಾಂತಿ ಹೋಮಗಳನ್ನು ನಡೆಸಿ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
