ಶಿಥಿಲಾವಸ್ಥೆಯಲ್ಲಿ ಸರ್ಕಾರಿ ಶಾಲೆ. ಮೂಲಸೌಕರ್ಯಗಳು ಒದಗಿಸಿ ಕೊಡುವಂತೆ ಕನ್ನಡ ಶಕ್ತಿ ಸಂಘ ಒತ್ತಾಯ
ಕೆಜಿಎಫ್: ಕೆಜಿಎಫ್ ತಾಲೂಕು ವ್ಯಾಪ್ತಿಯಲ್ಲಿರುವ ಬಡಮಾಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಥಿಲ ವ್ಯವಸ್ಥೆಯಲ್ಲಿರುವ ಶಾಲಾ ಕಟ್ಟಡ. ಮಳೆ ಬಂದರೆ ಸೋರುತ್ತಿರುವ ಕೊಠಡಿ. ಕೆಳಗೆ ಕುಳಿತುಕೊಂಡು ಪಾಠವನ್ನು ಕೇಳುವ ಮಕ್ಕಳು. ಶೌಚಾಲಯ ವ್ಯವಸ್ಥೆ ಇಲ್ಲ. ಮಳೆ ಬಂದರೆ ಕೆರೆಯಂತಾಗುವ ಶಾಲೆಯ ಆವರಣ.
ಈ ಶಾಲೆಯಲ್ಲಿ ಇಷ್ಟೊಂದು ಸಮಸ್ಯೆಗಳಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು. ಕನ್ನಡ ಶಕ್ತಿ ಕೇಂದ್ರ ಕೋಲಾರ ಜಿಲ್ಲಾ ಅಧ್ಯಕ್ಷರು. ಬಾ. ಹ. ಶೇಖರಪ್ಪ ಶಾಲೆಗೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು. ಸರ್ಕಾರ ದ್ವಿಭಾಷಾ ನೀತಿಯನ್ನು ಜಾರಿಗೆ ತಂದಿದೆ. ಇದರಿಂದ ಕನ್ನಡದ ಮೇಲೆ ಹೆಚ್ಚು ಪರಿಣಾಮ ಬೀರುವ ಆತಂಕ ಇದೆ. ಇದರ ಬಗ್ಗೆ ಸರ್ಕಾರ ಜಾಗೃತಿ ವಹಿಸಬೇಕು. ದ್ವಿಭಾಷಾ ಪದ್ಧತಿಯನ್ನು ತರಬೇಕಾದರೆ ಮೊದಲು ಶಾಲೆಯಲ್ಲಿ ಮೂಲಸೌಕರ್ಯಗಳು ಒದಗಿಸಿಕೊಡಬೇಕು. ಇಂಗ್ಲಿಷ್ ಭಾಷಾ ಶಿಕ್ಷಕರನ್ನು ನೇಮಕಗೊಳಿಸಬೇಕು.
ಇರುವ ಶಿಕ್ಷಕರನ್ನೇ ಬಳಸಿಕೊಳ್ಳಬಾರದು. ಮಕ್ಕಳು ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ಎಂದು ಆಗ್ರಹಿಸಿದರು. ಈಗಾಗಲೇ ಬಡಮಾಕನಹಳ್ಳಿ ಸರ್ಕಾರಿ ಶಾಲೆಗೆ ಸೇರಿರುವ ಶಾಲೆ ಕಟ್ಟಡ ಸಮೇತ ಇರುವ 5:00 ಗುಂಟೆ ಜಾಗವನ್ನು ಸಮುದಾಯ ಭವನಕ್ಕೆ ಪಂಚಾಯತಿಯಿಂದ ಖಾತೆ ಮಾಡಿಸಿಕೊಟ್ಟಿದ್ದಾರೆ.
ಶಾಲೆಯ ಜಾಗವನ್ನು ಸಮುದಾಯ ಭವನ ನಿರ್ಮಾಣ ಮಾಡಲು ಯಾವ ರೀತಿ ಖಾತೆ ಮಾಡಿಕೊಳ್ಳಲು ಸಾಧ್ಯ. ಈ ವಿಷಯದ ಬಗ್ಗೆ ಶಾಸಕರು ಗಮನ ಹರಿಸಬೇಕು. ನಾವು ಯಾವುದೇ ಸಮುದಾಯವನ್ನು ವಿರೋಧ ಮಾಡುವುದಿಲ್ಲ. ಸಮುದಾಯ ಭವನ ನಿರ್ಮಾಣಕ್ಕೆ ಬೇರೆ ಕಡೆ ಸರ್ಕಾರಿ ಜಾಗವನ್ನು ನೀಡಲಿ ನಮ್ಮದು ಏನು ಅಭ್ಯಂತರ ಇಲ್ಲ ಎಂದು ತಿಳಿಸಿದರು.
160ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಅವರಿಗೆ ಆಟದ ಮೈದಾನವನ್ನು ಕಲ್ಪಿಸಿಕೊಳ್ಳಬೇಕು. ಸರ್ಕಾರಗಳು ಶಾಲೆಗಳನ್ನು ಉಳಿಸಲು ಬೆಳೆಸಲು ಮೊದಲ ಆದ್ಯತೆ ನೀಡಬೇಕು. ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೆ ಶಾಲಾ ಮಕ್ಕಳಿಗೆ ಆಟದ ಮೈದಾನವನ್ನು ಕಳುಹಿಸಿಕೊಡಬೇಕು ಎಂದು ಶಾಸಕಿ ರೂಪಕಲಾ ಶಶಿಧರ್ ಹಾಗೂ ಬಿಇಒ ರವರಿಗೆ ಈ ಸಂದರ್ಭದಲ್ಲಿ ಕಳಕಳಿಯ ಮನವಿ ಮಾಡಿದರು. ಈ ಸಂದರ್ಭದಲ್ಲಿ E ಡಾಕ್ಟರ್. ನಾರಾಯಣಗೌಡ. ಆರ್. ಎ. ಗುರುದತ್. ಬಿಜೆ .ಗೋಣಿ. ಶಿವಶರಣ ಕಲ್ಯಾಣಕರ್. ಇದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
