ಬಡವರ ಪಾಲಿಗೆ ಉಚಿತ ಅರೋಗ್ಯ ತಪಾಸಣೆ ಶಿಬಿರಗಳು ಸಹಾಯಕರಿ-ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಸ್.ಸುರೇಶ್
ಬಾಗೇಪಲ್ಲಿ: ಸುತ್ತಮುತ್ತಲಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ರೋಗಿಗಳು ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ತಪಾಸಣೆ ಮಾಡಿಸಿಕೊಂಡು, ಹೆಚ್ಚಿನ ಶಸ್ತ್ರಚಿಕಿತ್ಸೆ ಅವಶ್ಯವಿದ್ದವರಿಗೆ ತಮ್ಮ ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ನೀಡಿ ಆಕಾಶ್ ಆಸ್ಪತ್ರೆ ವತಿಯಿಂದ ಸಂಪೂರ್ಣ ಉಚಿತವಾಗಿ ಶಾಸ್ತ್ರ ಚಿಕಿತ್ಸೆ ಮಾಡಿಸಿಕೊಡಲಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಸ್.ಸುರೇಶ್ ತಿಳಿಸಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ಘಂಟಮವಾರಪಲ್ಲಿ ಪಂಚಾಯಿತಿ ಪಾತಬಾಗೇಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆಕಾಶ್ ಆಸ್ಪತ್ರೆ,ಪಾತಬಾಗೇಪಲ್ಲಿ ಗ್ರಾಮಸ್ಥರ ಸಂಯುಕ್ತಶ್ರದಲ್ಲಿ ನಡೆದ ಎರಡೇ ವರ್ಷದ ಉಚಿತ ಅರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮಗಳು ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ. ಪಾಸ್ಟ್ ಫುಡ್ ಸೇವನೆ, ದೈಹಿಕ ಆರೋಗ್ಯದ ಕಡೆ ಗಮನ ಹರಿಸದಿರುವುದು ಹಾಗೂ ಪೌಷ್ಟಿಕಾಹಾರದ ಕೊರತೆಯಂತಹ ಸವಾಲುಗಳು ಅನಾರೋಗ್ಯಕ್ಕೆ ಕಾರಣವಾಗುತ್ತಿವೆ.
ಈ ಭಾಗದಲ್ಲಿ ಹೆಚ್ಚು ಫ್ಲೋರೈಡ್ ನೀರಿನ ಸಮಸ್ಯೆಗಳಿದ್ದು, ಮಕ್ಕಳಲ್ಲಿ ಹೆಚ್ಚಾಗಿ ದಂತ ಮತ್ತು ಮೂಳೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತಿವೆ. ಹಾಗಾಗಿ ಅಂತಹ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ದೃಷ್ಟಿದೋಷಗಳಿಗೆ ಕನ್ನಡಕಗಳನ್ನು ನೀಡಲಾಗುತ್ತದೆ ಎಂದರು.
ಈ ಉಚಿತ ಅರೋಗ್ಯ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ರೋಗಿಗಳು ಈ ತಪಾಸಣಾ ಭಾಗವಹಿಸಿದ್ದರು. ಹೃದಯಕ್ಕೆ ಸಂಬಂಧಿಸಿದ, ಮೂತ್ರಪಿಂಡ, ನರಗಳ, ಕ್ಯಾನ್ಸರ್, ಮೂಳೆ, ಚಿಕ್ಕಮಕ್ಕಳ ಆರೋಗ್ಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಆಕಾಶ್ ಆಸ್ಪತೆ ವೈದ್ಯರಾದ ಡಾ! ಶಾಲಿನಿ, ಡಾ! ವಿಶಾಲ್, ಡಾ!ಚಂದನ್, ಡಾ!ಮಂಜು ಶ್ರೀ,ಡಾ!ಯೋಗೇಂದ್ರ, ಡಾ!ಅನಿತಾ, ಡಾ!ಹರ್ಷಿಣಿ,ಶುಶ್ರೂಷಕಿಯರಾದ ಕಲ್ಯಾಣಿ,ರೋಜ್ಮೇರಿ, ಚಿನ್ಮಯ, ನಳಿನಾ,ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಸೊಮ್ಯಾ ಅಶೋಕ್ ಕುಮಾರ್, ಶಿವಪ್ಪ, ಗಂಗಾಧರಪ್ಪ,ಸುರೇಶ್,ರಾಜು,ಪೂಸುಲು ಶಿವಪ್ಪ, ಆಚಾರಿ, ನಾರಾಯಣಸ್ವಾಮಿ, ಸೇರಿದಂತೆ ಮತ್ತಿತರರು ಇದ್ದರು...
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
