ಕೆಜಿಎಫ್ ನಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ರವರ ಹುಟ್ಟುಹಬ್ಬ ಆಚರಣೆ
ಕೆಜಿಎಫ್: ನಗರದ ಗಾಂಧಿ ವೃತ್ತದಲ್ಲಿ ಕೆಜಿಎಫ್ ಕಾಂಗ್ರೆಸ್ ಕಮಿಟಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ರವರ 81ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಕಾಂಗ್ರೆಸ್ನ ಸದಸ್ಯರು ಎಂ ಸಿ ಮೋಹನ್ ಮಾತನಾಡಿ ದೇಶಕ್ಕೆ ರಾಜೀವ್ ಗಾಂಧಿ ರವರ ಕೊಡುಗೆ ಅಪಾರ ಇಂದು ನಮ್ಮ ದೇಶದಲ್ಲಿ ಐಟಿ ಬೆಳವಣಿಗೆ ಕಾರಣ ಅವರೇ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ತಂದು ಬಡವರಿಗೆ ಕೊಟ್ಟಿದ್ದಾರೆ.
ಎಷ್ಟೇ ವರ್ಷಗಳು ಕಳೆದರು ಅಂತಹ ಮಹಾನ್ ವ್ಯಕ್ತಿಯನ್ನು ನಾವು ಮರೆಯಲು ಸಾಧ್ಯವಿಲ್ಲ. ನಾವು ಸಹ ಅಂಥವರ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಒಂದು ಕುಟುಂಬ ತರಹ ಇಲ್ಲಿ ಯಾವುದೇ ಕಾರ್ಯಕರ್ತರ ಆಗಲಿ ಪಕ್ಷಕ್ಕೆ ಒಂದಾಗಿ ದುಡಿಯಬೇಕು.
ಮುಂದೆ ಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು. ಎಂದು ಪಣ ತೊಡೋಣ ಎಂದು ಕರೆ ನೀಡಿದರು.
ಮುಂದೆ ಬರುವ ಚುನಾವಣೆಯಲ್ಲಿ ನಮ್ಮ ನಾಯಕರು ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಬಹುಶ ನುಡಿದರು.
ನಗರಸಭೆ ಸದಸ್ಯರು ಮಾಣಿಕ್ಯಂ ಮಾತನಾಡಿ ರಾಜೀವ್ ಗಾಂಧಿ ರವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ನಮ್ಮ ದೇಶದ ಉಕ್ಕಿನ ಮನುಷ್ಯ ಎಂದು ಕೊಂಡಾಡಿದರು ಅವರ ಸಿದ್ಧಾಂತಗಳನ್ನು ನಾವು ಅಳವಡಿಸಿಕೊಳ್ಳಬೇಕು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ತಾಲೂಕು ಯುವ ಘಟಕದ ಅಧ್ಯಕ್ಷರು. ಇರ್ಬಾಸ್ ಅಹಮದ್. ಕೆಪಿಸಿಸಿ ಕಾರ್ಯದರ್ಶಿಗಳು ಶ್ರೀನಿವಾಸ್. ಮುಖಂಡರು ಮೊದಲಮುತ್ತು. ನಗರಸಭೆ ಸದಸ್ಯರು. ಜಾಫರ್ ಉಲ್ಲಾ. ಹಸ್ಸರ್ ಖಾನ್. ಎಲ್ಲಾ ಮುಖಂಡರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
