ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ: ಶಾಸಕಿ ರೂಪಕಲಾ
ಕೆಜಿಎಫ್: ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಿ ಎನ್ನುವ ಪ್ರಶ್ನೆ ಇಲ್ಲ. ನನ್ನನ್ನು ನನಗೆ ಮತ ನೀಡಿದ ಮತದಾರರು ಪ್ರಶ್ನೆ ಮಾಡಲಿ ಆಗ ನಾನು ಉತ್ತರ ನೀಡುತ್ತೇನೆ. ಸಂಬಂಧ ಇಲ್ಲದವರು ಪ್ರಶ್ನೆ ಮಾಡುವ ಹಕ್ಕು ಇಲ್ಲ ಎಂದು ನಗರದ ಪರಂಡಹಳ್ಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೆಜಿಎಫ್ ನಗರದಿಂದ ಕ್ಯಾಸಂಬಳ್ಳಿ ಗ್ರಾಮವರೆಗೂ ಐದು ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಕ್ಯಾಸೆಂಬಳ್ಳಿ ಯಿಂದ ಇಂದ ರಾಜಪೆಟ್ ರೋಡ್ ವರೆಗೂ 7 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡುತ್ತೇವೆ ಇದರಲ್ಲಿ ಮುಖ್ಯಮಂತ್ರಿ ವಿಶೇಷ ನಿಧಿಯಿಂದ ಶಕಡ 60ರಷ್ಟು ನಿಧಿಯಿಂದ ಮಾಡಲಾಗಿದೆ. ಅದೇ ರೀತಿಯಾಗಿ ಟಿ. ಗೊಲ್ಲಹಳ್ಳಿ ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಬ್ರಿಡ್ಜ್ ಗಳನ್ನು 7 ಕೋಟಿ ಅನುದಾನದಲ್ಲಿ ನಿರ್ಮಿಸಲಾಗುತ್ತದೆ. ಒಟ್ಟಾರೆಯಾಗಿ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಕಾಣುತ್ತಿದ್ದು, ಇದು ಸುಮಾರು 10 ವರ್ಷದ ಮೊದಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಇದರ ಫಲವಾಗಿ ಇಂದು ಒಂದೊಂದೇ ಕಾರ್ಯ ಸುಗಮವಾಗಿ ನಡೆಯುತ್ತಿದೆ. ಯಾವಾಗ ಸರ್ಕಾರದಿಂದ ಕಾರ್ಖಾನೆಗಳು ನಿರ್ಮಿಸಲು ಜಾಗವನ್ನು ಮೀಸಲಿಟ್ಟಿದ್ದೇವೆ. ಆವಾಗ ತಾಲೂಕಿನಲ್ಲಿ ಮುಖ್ಯವಾಗಿ ಮೂಲಸೌಕರ್ಯಗಳು ಬೇಕಾಗುತ್ತೆ. ಆ ದೃಷ್ಟಿಕೋನ ಇಟ್ಟುಕೊಂಡು. ರಸ್ತೆಗಳ ಅಭಿವೃದ್ಧಿ. ಹತ್ತು ಕಿಲೋಮೀಟರ್ ವಿದ್ಯುತ್ ದೀಪಗಳನ್ನು ಬೆಳಗಿಸುವ ಮೂಲಕ ಬೆಳಕಿನ ನಗರಿ ಮಾಡಿರುವುದು. ಕೆಜಿಎಫ್ ನಗರದಿಂದ ಕೆಂಪಾಪುರ ದವರೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಮಾಡಿರುವುದು. ಯಾರೆ ನನ್ನ ಕ್ಷೇತ್ರದಲ್ಲಿ ಖಾಸಗಿ ಉದ್ಯಮಿಗಳು ಇನ್ವೆಸ್ಟ್ ಮಾಡಲು ಬಂದಾಗ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ನೋಡುವುದು. ಈಗಾಗಲೇ ಮೂವರು ಖಾಸಗಿ ಇನ್ವೆಸ್ಟ್ರ ಇನ್ವೆಸ್ಟ್ ಮಾಡಲು ಕಾರ್ಖಾನೆ ನಿರ್ಮಿಸಲು ನೊಂದಾಯಿಸಿಕೊಂಡಿದ್ದಾರೆ . ಒಟ್ಟಾರೆಯಾಗಿ ಕ್ಷೇತ್ರದ ಜನತೆಗೆ ಉದ್ಯೋಗ ಸೃಷ್ಟಿ ಮಾಡಿಕೊಡುವುದೇ ನನ್ನ ಮುಖ್ಯ ಉದ್ದೇಶ. ರಾಜ್ಯದಲ್ಲೇ ಯಾವ ತಾಲೂಕು ಅಭಿವೃದ್ಧಿ ವಿಚಾರದಲ್ಲಿ ಕೆಜಿಎಫ್ ತಾಲೂಕನ್ನು ಮೀರಿಸಬಾರದು. ಆ ರೀತಿ ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು. ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ಇಂದಿರಾಗಾಂಧಿ. ದಯಾಶಂಕರ್. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು. ವಲ್ಲಳ್ಳ ಮುನಿಸ್ವಾಮಿ. ಪಿಡಬ್ಲ್ಯೂ ಇಲಾಖೆ ಅಧಿಕಾರಿ ರಾಜಶೇಖರ್. ನಗರಸಭೆ ಸದಸ್ಯರ ಮಾಣಿಕ್ಯಂ. ಕರುಣಾಕರನ್. ವಕೀಲರು. ಪದ್ಮನಾಭ ರೆಡ್ಡಿ. ಹಲವಾರು ಮುಖಂಡರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
