ದೇವರಾಜು ಅರಸು ದಾಖಲೆ ಸರಿಗಟ್ಟಿದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿ ಸಂಭ್ರಮಾಚರಣೆ
ಸಂತೆಮರಹಳ್ಳಿ: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಗೆ ಆಡಳಿತ ನಡೆಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ತೆಳ್ಳನೂರು ಗ್ರಾಮದ ಕನಕ ಅಭಿಮಾನಿ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಟಿ ಎಸ್ ಕುಮಾರ್ ಮಾತನಾಡಿ ಮುಖ್ಯ ಮಂತ್ರಿ ಸಿದ್ದರಾಮಯ್ಯವರ ಸುದೀರ್ಘ ಆಡಳಿತದಲ್ಲಿ ಯಾವುದೇ ಕಪ್ಪು ಚುಕ್ಕಿ ಬಾರದೆ ಆಡಳಿತ ಮಾಡಿದ ದಕ್ಷ ಮುಖ್ಯ ಮಂತ್ರಿ ಎನಿಸಿಕೊಂಡಿದ್ದಾರೆ.
ಅರಸು ಮುಖ್ಯ ಮಂತ್ರಿ ದಾಖಲೆ ಸರಿಗಟ್ಟಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಹಾಗೂ ಕರ್ನಾಟಕ ರಾಜ್ಯದ ಜನತೆ ಆಶೀರ್ವಾದದಿಂದ ದೇವರಾಜು ಅರಸು ದಾಖಲೆ ಮುರಿಯಲು ಸಾಧ್ಯವಾಗಿದೆ ಹಾಗೂ ಮುಂಬರುವ ಅವಧಿಗೆ ಬಡವರು, ಹಿಂದುಳಿದ ವರ್ಗಗಳ ಹಾಗೂ ದೀನ ದಲಿತರ ಪರವಾಗಿ ನಿಂತು ಕೆಲಸ ಮಾಡಲಿ ಎಂದು ಹಾರೈಸೋಣ ಎಂದರು.
ಈ ಸಂದರ್ಭದಲ್ಲಿ ಬಂದಿರುವಂತಹ ಅಭಿಮಾನಿಗಳಿಗೆ ನಾಟಿ ಕೋಳಿ ಪಲಾವ್ ಹಾಗೂ ಬಾಡು ಊಟ ನೀಡಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ್, ಲೋಕೇಶ್, ಗಿರೀಶ್, ಮಹದೇವೇಗೌಡ, ರೇಣುಕಾ, ನಾಗೇಶ್, ಸತೀಶ್, ಟಿ ಕೆ ಶಿವಣ್ಣ, ಗೌತಮ್ಮ್, ಟಿ ಆರ್ ರಾಮಸ್ವಾಮಿ ಭಾಗಿಯಾದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
