ಭಜನ-ಪ್ರವಚನ-ಸಂಕೀರ್ತನ

ಭಜನ-ಪ್ರವಚನ-ಸಂಕೀರ್ತನ

ಭಜನ-ಪ್ರವಚನ-ಸಂಕೀರ್ತನ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಕೆಂಗೇರಿ ಉಪನಗರ ಇವುಗಳ ಸಂಯುಕ್ತಾಶ್ರಯದಲ್ಲಿ ಜನವರಿ 23 ರಿಂದ 26ರ ವರೆಗೆ (ಪ್ರತಿದಿನ ಸಂಜೆ 6 ರಿಂದ 8)  ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ : ಜನವರಿ 23, ಮಂಗಳವಾರ, ಸಂಜೆ 6-00ಕ್ಕೆ : ಕೆಂಗೇರಿಯ ಚಂದ್ರಿಕಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಗುರುರಾಜ ಕುಲಕರ್ಣಿಯವರಿಂದ ಪ್ರವಚನ. ವಿಷಯ : "ಶ್ರೀಮದ್ ವಾಲ್ಮೀಕಿ ರಾಮಾಯಣ". ಜನವರಿ 24, ಬುಧವಾರ ಸಂಜೆ 6-00ಕ್ಕೆ : ರಾಜರಾಜೇಶ್ವರಿನಗರದ ಶ್ರೀ ಹಯಗ್ರೀವ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಗುರುರಾಜ ಕುಲಕರ್ಣಿಯವರಿಂದ ಪ್ರವಚನ. ವಿಷಯ : "ಶ್ರೀಮದ್ ವಾಲ್ಮೀಕಿ ರಾಮಾಯಣ".
ಜನವರಿ 25, ಗುರುವಾರ ಸಂಜೆ 6-00ಕ್ಕೆ : ರಾಜರಾಜೇಶ್ವರಿನಗರದ ಶ್ರೀ ಪೂರ್ಣಪ್ರಜ್ಞ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಗುರುರಾಜ ಕುಲಕರ್ಣಿಯವರಿಂದ ಪ್ರವಚನ. ವಿಷಯ : "ಶ್ರೀಮದ್ ವಾಲ್ಮೀಕಿ ರಾಮಾಯಣ". ಜನವರಿ 26, ಶುಕ್ರವಾರ, ಸಂಜೆ 6-30ಕ್ಕೆ : "ಹರಿನಾಮ ಸಂಕೀರ್ತನೆ". ಗಾಯನ : ಕು|| ಮನಸ್ವಿ ಕಶ್ಯಪ್, ಕೀ-ಬೋರ್ಡ್ : ಶ್ರೀ ಅಮಿತ್ ಶರ್ಮಾ, ತಬಲಾ : ಶ್ರೀ ಸರ್ವೋತ್ತಮ. ಮೇಲ್ಕಂಡ ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಮತ್ತು ಶ್ರೀ ವೆಂಕಟೇಶ್ವರಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಯ ಕಾರ್ಯಕ್ರಮಗಳ ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಹಾಗೂ ಶ್ರೀಮಠದ ಗೌರವ ಅಧ್ಯಕ್ಷರಾದ ಡಾ|| ಸುಧೀಂದ್ರಕುಮಾರ್ ಅವರು ವಿನಂತಿಸಿದ್ದಾರೆ.