ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ದಸರಾ ಮಹೋತ್ಸವ
ಬೆಂಗಳೂರು : ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ದಸರಾ ಮಹೋತ್ಸವ ಆಚರಿಸಲಿದ್ದು ಪ್ರತಿದಿನ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6-30ಕ್ಕೆ : ಸೆಪ್ಟೆಂಬರ್ 22-ಶ್ರೀಮತಿ ಪ್ರಸನ್ನಲಕ್ಷ್ಮಿ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ", ಸೆಪ್ಟೆಂಬರ್ 23-ವಿಜಯನಗರದ ಸ್ಫೂರ್ತಿ ಮಹಿಳಾ ಮಂಡಲಿಯ ಸದಸ್ಯರಿಂದ "ದೇವರನಾಮಗಳು", ಸೆಪ್ಟೆಂಬರ್ 24-ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದಾಸರ ಪದಗಳ ಗಾಯನ", ಸೆಪ್ಟೆಂಬರ್ 25-'ಸಂಗೀತ ಕಲಾನಿಧಿ' ಡಾ|| ವಿದ್ಯಾಭೂಷಣ ಮತ್ತು ಸಂಗಡಿಗರು "ಹರಿನಾಮ ಸಂಕೀರ್ತನೆ", ಸೆಪ್ಟೆಂಬರ್ 26-ಗಾನ ಸೌರಭ ಶಾಲೆಯ ವಿದ್ಯಾರ್ಥಿಗಳಿಂದ "ಚಿತ್ರಾಕ್ಷಿ ಕಲ್ಯಾಣ" ಯಕ್ಷಗಾನ, ಸೆಪ್ಟೆಂಬರ್ 27-ಕೆನರಾ ಬ್ಯಾಂಕ್ ಕಾಲೋನಿ ಮಹಿಳಾ ಸದಸ್ಯರಿಂದ "ವೈವಿಧ್ಯ ಮನರಂಜನಾ ಕಾರ್ಯಕ್ರಮ", ಸೆಪ್ಟೆಂಬರ್ 28-ಶ್ರೀಮತಿ ಸುಗನ್ಯ ರಾಘವ್, ಶ್ರೀಮತಿ ಸುಪ್ರಿಯಾ ಅಶ್ವಿನ್ ಮತ್ತು ಸಂಗಡಿಗರಿಂದ "ನೃತ್ಯ ಪ್ರದರ್ಶನ", ಸೆಪ್ಟೆಂಬರ್ 29-ಗಾನಸಿರಿ ಟ್ರಸ್ಟ್ ದಿ ಸ್ಕೂಲ್ ಆಫ್ ಮ್ಯೂಸಿಕ್ ಕಲಾವಿದರಿಂದ "ಭಕ್ತಿ ಸಂಗೀತ", ಸೆಪ್ಟೆಂಬರ್ 30-"ದುರ್ಗಾ ನಮಸ್ಕಾರ", ಅಕ್ಟೋಬರ್ 1-ಕಲಾಂಷು ಕಲ್ಚರಲ್ ಟ್ರಸ್ಟಿನ ತಂಡದವರಿಂದ "ನೃತ್ಯ ಸಂಗೀತ" ಹಾಗೂ ಅಕ್ಟೋಬರ್ 2-ಶ್ರೀ ವರಸಿದ್ಧಿ ವಿನಾಯಕ ಭಜನಾ ಮಂಡಳಿಯ ಸದಸ್ಯರಿಂದ "ಭಜನಾಮೃತ" ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಪದಾಧಿಕಾರಿಗಳು ತಿಳಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
