ಸಹಕಾರನಗರದಲ್ಲಿ ಟಿ ಟಿ ಡಿ ಕಾರ್ಯಕ್ರಮ

Jun 23, 2025 - 10:55
 0  4
ಸಹಕಾರನಗರದಲ್ಲಿ ಟಿ ಟಿ ಡಿ ಕಾರ್ಯಕ್ರಮ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸಹಕಾರನಗರದ ಶ್ರೀಮದುತ್ತರಾದಿ ಮಠದಲ್ಲಿ ಜೂನ್ 24 ರಿಂದ 27ರ ವರೆಗೆ ವಿವಿಧ ಧಾರ್ಮಿಕ| ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಜೂನ್ 24, ಮಂಗಳವಾರ ಸಂಜೆ 6-00ಕ್ಕೆ ಶ್ರೀಕೃಷ್ಣಾಮೃತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ "ತಿರುಪತಿ ಕ್ಷೇತ್ರದ ಮಹಿಮೆ" ಧಾರ್ಮಿಕ ಪ್ರವಚನ.
ಜೂನ್ 25, ಬುಧವಾರ : ಸಂಜೆ 6-00ಕ್ಕೆ ಶ್ರೀ ವೇಣುಗೋಪಾಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ "ತಿರುಪತಿ ಕ್ಷೇತ್ರದ ಮಹಿಮೆ" ಧಾರ್ಮಿಕ ಪ್ರವಚನ.
ಜೂನ್ 26, ಗುರುವಾರ ಸಂಜೆ 6-00ಕ್ಕೆ "ಹರಿನಾಮ ಸಂಕೀರ್ತನೆ". ಗಾಯನ : ಕು|| ಅಭಿಜ್ಞಾ ಪಿ. ಕಶ್ಯಪ್, ಪಿಟೀಲು : ವಿದುಷಿ ಭಾರ್ಗವಿ, ಮೃದಂಗ : ವಿದ್ವಾನ್ ನಟರಾಜ್.
ಜೂನ್ 27, ಶುಕ್ರವಾರ : ಸಂಜೆ 6-00ಕ್ಕೆ ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಪ್ರಾಣೇಶಾಚಾರ್ಯ ಚೆಟ್ಟಿಯವರಿಂದ "ತಿರುಪತಿ ಕ್ಷೇತ್ರದ ಮಹಿಮೆ" ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಸ್ಥಳ : ಶ್ರೀಮದುತ್ತರಾದಿಮಠ, ಸಹಕಾರನಗರ, ಬೆಂಗಳೂರು-560092

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456