ಗುರುರಾಯರ ಸನ್ನಿಧಿಯಲ್ಲಿ ವೈಷ್ಣವಿ ಗಾಯನ ಸೇವೆ
ಬೆಂಗಳೂರಿನ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರದ (ಮೇ 22) ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ವೈಷ್ಣವಿ ಕೊಪ್ಪ ಅವರು "ಹರಿದಾಸ ನಮನ" ಶೀರ್ಷಿಕೆಯಲ್ಲಿ ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನು ತಾರತಮ್ಯೋಕ್ತವಾಗಿ ಪ್ರಸ್ತುತ ಪಡಿಸಿದರು. ಕು|| ಧೃತಿ ಸಹ-ಗಾಯನ ಮಾಡಿದರು. ವಾದ್ಯ ಸಹಕಾರದಲ್ಲಿ ಶ್ರೀ ಅಮಿತ್ ಶರ್ಮಾ (ಕೀ-ಬೋರ್ಡ್), ಶ್ರೀ ಮಧುಸೂದನ್ ಕೊಪ್ಪ ಮತ್ತು ಶ್ರೀ ವಿನಾಯಕ ಜೋಶಿ (ತಬಲಾ), ಶ್ರೀ ವಿನೀತ ಜೋಶಿ (ತಾಳ) ಸಾಥ್ ನೀಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
