ಪಾಮನಕಲ್ಲೂರು: ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಪೋಸ್ಟರ್ ಬಿಡುಗಡೆ
ರಾಯಚೂರು (ಮಾ.20):ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಎಪ್ರಿಲ್ 20ರಂದು ನಡೆಯಲಿರುವ ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು.
ಶ್ರೀ ಆದಿ ಬಸವೇಶ್ವರ ಸೇವಾ ಸಮಿತಿಯ ಮುಖಂಡರು ಹಾಗೂ ಗ್ರಾಮದ ಹಿರಿಯರ ನೇತೃತ್ವದಲ್ಲಿ ಗ್ರಾಮದ ಹೊರವಲಯದಲ್ಲಿರುವ (ರಾಯಚೂರು - ಲಿಂಗಸುಗೂರು ಮುಖ್ಯ ರಸ್ತೆ) ಶ್ರೀ ಆದಿ ಬಸವೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಸಭೆ ನಡೆಸಿದ ಬಳಿಕ, ಪೋಸ್ಟರ್ ಬಿಡುಗಡೆ ಮಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏ.20ರಂದು ಬೆಳಗ್ಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿವೆ. ಅದೇ ದಿನ ಸಂಜೆಯ ವೇಳೆ ರಥೋತ್ಸವ ಕಾರ್ಯಕ್ರಮ ನೆರವೇರಲಿದೆ. ಆ ದಿನ ದಿನವಿಡೀ ಅನ್ನ ಪ್ರಸಾದವಿರುತ್ತದೆ. ಎ. 22ರಂದು ಸಂಜೆಯ ವೇಳೆ ಉಚ್ಛಯ್ಯ ಜರುಗಲಿದೆ.
ಪಾಮನಕಲ್ಲೂರು ಗ್ರಾಮದ ಶ್ರೀ ಆದಿ ಬಸವೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆ ಮಾಡಿಕೊಳ್ಳಲು ಬಯಸುವ ವಧು - ವರರು ಎ.15ರೊಳಗೆ ಹೆಸರು ನೊಂದಣಿ ಮಾಡಿಕೊಳ್ಳಬಹುದಾಗಿರುತ್ತದೆ, ಹೆಚ್ಚಿನ ಮಾಹಿತಿಗಾಗಿ 8197885957, 9591683819, 9902633380, 8660901590 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದು ಗುರುವಾರ ನಡೆದ ಸಭೆಯ ಬಳಿಕ ಶ್ರೀ ಆದಿ ಬಸವೇಶ್ವರ ಸೇವಾ ಸಮಿತಿಯವರು ತಿಳಿಸಿದರು.
ಪೋಸ್ಟರ್ ಬಿಡುಗಡೆಯ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯ ಸಂತೋಷ ರಾಜಗುರು, ಹಿರಿಯರಾದ ಅಮರಯ್ಯ ತಾತ ಹೊರಗಿನ ಮಠ, ತಿರುಪತಿ ಸಾನಬಾಳ, ದೇವಪ್ಪ ತಳವಾರ, ಬಸಣ್ಣ ಕುರುಬರು, ಪರಸಪ್ಪ ಗಂಟ್ಲಿ, ಮಾಳಿಂಗರಾಯ, ಬಸನಗೌಡ ಪೊಲೀಸ್ ಪಾಟೀಲ್, ಶಿವಪ್ಪ ಕೊಂಡಾಲ, ಗುಡದಯ್ಯ ಗಡ್ಡಿಮನಿ, ಅಯ್ಯಪ್ಪ ಕುರುಬರು, ಹನುಮಂತ ಅರಿಕೇರಿ, ಮಲ್ಲಪ್ಪ ಹಿರೇಮನಿ, ಶ್ರೀನಿವಾಸ ಸಾನಬಾಳ, ರಮೇಶ್, ಬಸವರಾಜ, ಧರ್ಮಣ್ಣ ಕಲ್ಲೂರು, ಬಸವರಾಜ ಸಾನಬಾಳ ಸೇರಿದಂತೆ ಅನೇಕರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
