ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ: ನ್ಯಾ. ಶಿವಕುಮಾರ್. ಬಿ ಅಭಿಮತ
ಕೆಜಿಎಫ್: ಇಂದಿನ ಆಧುನಿಕ ಯುಗದಲ್ಲಿ. ಮಾನವನ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಇದನ್ನು ನಾವು ನಿವಾರಣೆ ಮಾಡಲು. ಮುಖ್ಯವಾಗಿ ಪ್ರತಿನಿತ್ಯ ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಎಂದು ಕೆಜಿಎಫ್ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಕೆಜಿಎಫ್ ಇವರ ಜಂಟಿ ಸಹಯೋಗದಲ್ಲಿ 11ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು. ಶಿವಕುಮಾರ್. ಬಿ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಮ್ಮ ದೇಹವನ್ನು ಸದೃಢವಾಗಿ ಆರೋಗ್ಯಕರವಾಗಿ.
ಮನಸ್ಸನ್ನು ಏಕಾಗ್ರತವಾಗಿ. ಇಡಲು ಪ್ರತಿದಿನ ಬೆಳಗ್ಗೆ ಯೋಗ ಮಾಡುವುದರಿಂದ ಅನುಕೂಲ. ಇದನ್ನು ನಾವು ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಇದರ ವಿಶೇಷತೆಯನ್ನು ತಮ್ಮ ಅಕ್ಕ ಪಕ್ಕದ ಮನೆಯವರಿಗೆ ಹಾಗೂ ತಮ್ಮ ಸ್ನೇಹಿತರಿಗೆ ಹಿರಿಯ ನಾಗರಿಕರಿಗೆ ತಿಳಿಸಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷರು. ಎಸ್ .ಎನ್. ರಾಜಗೋಪಾಲಗೌಡ. ಮಾತನಾಡಿ ನಾವು ಪ್ರತಿದಿನ ಯೋಗಭ್ಯಾಸವನ್ನು ಮಾಡಿದರೆ ನಮ್ಮ ಆರೋಗ್ಯ ಸುಧಾರಣೆ ಆಗುತ್ತದೆ. ಈ ಯೋಗದ ಬಗ್ಗೆ ಎಲ್ಲರಿಗೂ ತಿಳಿಸುವಂತೆ ನಾವು ಅರಿವು ಮೂಡಿಸುವುದು ಅತಿ ಅವಶ್ಯಕ . ಎಂದರು. ನಾವು ಬೆಳಗಿನ ಜಾವ ಯೋಗ ಕೇಂದ್ರಗಳಿಗೆ. ಹೋಗುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ನಾವು ವೈದ್ಯರ ಹತ್ತಿರ ಹೋಗುವ ಅವಶ್ಯಕತೆ ಇರುವುದಿಲ್ಲ ಎಂದು. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಪರ ಹಿರಿಯ ನ್ಯಾಯಾಧೀಶರು, ಮತ್ತು ಜೆ ಎಂ ಎಫ್ ಸಿ ಕೆ ಜಿ ಎಫ್. ಮುಜಫರ್ ಏ ಮಂಜರಿ. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ. ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವೆಗಳ ಸಮಿತಿ, ವಿನೋದ್ ಕುಮಾರ್. ಎಂ. ವಕೀಲರ ಸಂಘದ ಉಪಾಧ್ಯಕ್ಷರು. ಮಣಿವಣ್ಣನ್. ವಕೀಲರು .ಯೋಗಾ ಶಿಕ್ಷಕರು. ಶಿವಪ್ಪ ಮತ್ತು ವಕೀಲರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
